ಹರೀಶ್ರಾಜ್ ಪ್ರೋಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಶ್ರೀಸತ್ಯನಾರಾಯಣ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಹರೀಶ್ರಾಜ್ ನಿರ್ದೇಶನದ ಈ ಚಿತ್ರಕ್ಕೆ ತಾಜಾ ರೋನಿ ಸಂಗೀತ ನೀಡಿದ್ದಾರೆ. ರಾಮ್ ರೆಡ್ಡಿ ಛಾಯಾಗ್ರಹಣ, ಶ್ರೀಕಾಂತ್ ಆನ್ಲೈನ್ ಸಂಕಲನ, ಮುಖೇಶ್ ಬಂಟ್ವಾಳ್ ಸಂಕಲನ ಹಾಗೂ ರವಿ ಕಲಾ ನಿರ್ದೇಶನವಿರುವ ಈ ಚಿತ್ರದ ಸಂಭಾಷಣೆಯನ್ನು ರಾಜು ಬೆಳಗೆರೆ ಹಾಗೂ ಇಳಕಿಯನ್ ಬರೆದಿದ್ದಾರೆ. ಹಾಡಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ರಚಿಸಿದ್ದಾರೆ.
ಹರೀಶ್ರಾಜ್, ರಮ್ಯ ಬಾರ್ನಾ, ಚಂದ್ರಶೇಖರ್(ಎಡಕಲ್ಲು ಗುಡ್ಡ), ಜೈಜಗದೀಶ್, ರಾಮಕೃಷ್ಣ, ರಾಧಾರಾಮಚಂದ್ರ, ಆಶಾ ಜೋಯಿಸ್, ಶಾಲಿನಿ, ಅಭಿಷೇಖ್, ಮೋಹನ್ ಜುನೇಜ, ಕೋಟೆ ಪ್ರಭಾಕರ್, ನರಹರಿ ರಾಜು ಮುಂತಾದವರಿದ್ದಾರೆ.